ನಾನೊಬ್ಬನೇ ನಿನ್ನ ನೆರವ ಪಡೆದಿದ್ದಾಗ
ನನ್ನ ಹಾಡೊಂದಕೇ ನಿನ್ನೆಲ್ಲ ಕೃಪೆ ಇತ್ತು ;
ಅಂಥ ಘನತೆಗಳಿಲ್ಲ ನನ್ನ ಕವಿತೆಗೆ ಈಗ
ಕಳೆಗುಂದಿ ಅದರ ಸ್ಥಳ ಈಗ ಅನ್ಯರ ಸೊತ್ತು
ಒಪ್ಪಿದೆನು ಒಲವೆ ನಿನ್ನೆಲ್ಲ ಪ್ರಿಯ ಚರ್ಚೆಗಳು
ಮೇಲು ಪ್ರತಿಭೆಯ ಲೀಲೆಗರ್ಹವೆನ್ನಿಸಿದವು ;
ಆದರೂ ನಿನ್ನ ಕವಿ ಕಂಡ ಹೊಸ ಹೊಳವುಗಳು
ನಿನ್ನಿಂದ ಕಳಚಿ ನಿನಗೇ ಮತ್ತೆ ತೊಡಿಸಿದವು ;
ಗುಣಶೀಲನೆಂದರೂ ನಿನ್ನ ನಡೆನುಡಿಯಲ್ಲೆ
ಇದ್ದದ್ದ ನೋಡಿ ಕದ್ದದ್ದು ; ಚೆನ್ನಿಗನೆಂದು
ಕೀರ್ತಿಸಿದರೂ, ಚೆಲುವ ನಿನ್ನ ಕೆನ್ನೆಗಳಲ್ಲೆ
ಕಂಡದ್ದು; ನಿನ್ನಲಿದ್ದದ್ದನ್ನೆ ಹೊಗಳಿದ್ದು.
ಅವನ ಮಾತಿಗೆ ಕೃತಜ್ಞತೆ ಹೇಳಲೇಕಿನ್ನು ,
ನೀನೆ ನೀಡಿರಲು ಅವ ಸಲಿಸಬೇಕಾದ್ದನ್ನು?
*****
ಮೂಲ: ವಿಲಿಯಂ ಷೇಕ್ಸ್ಪಿಯರ್
Sonnet 79
Whilst I alone did call upon thy aid
Related Post
ಸಣ್ಣ ಕತೆ
-
ಆಮಿಷ
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
-
ವಿಷಚಕ್ರ
"ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…
-
ಮೌನವು ಮುದ್ದಿಗಾಗಿ!
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…
-
ಕರಿ ನಾಗರಗಳು
ಚಿತ್ರ: ಆಂಬರ್ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್ ನೀರು ಹರಿಯುತ್ತಿದ್ದ… Read more…
-
ಇರುವುದೆಲ್ಲವ ಬಿಟ್ಟು
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…