ನಾನೊಬ್ಬನೇ ನಿನ್ನ ನೆರವ ಪಡೆದಿದ್ದಾಗ

ನಾನೊಬ್ಬನೇ ನಿನ್ನ ನೆರವ ಪಡೆದಿದ್ದಾಗ
ನನ್ನ ಹಾಡೊಂದಕೇ ನಿನ್ನೆಲ್ಲ ಕೃಪೆ ಇತ್ತು ;
ಅಂಥ ಘನತೆಗಳಿಲ್ಲ ನನ್ನ ಕವಿತೆಗೆ ಈಗ
ಕಳೆಗುಂದಿ ಅದರ ಸ್ಥಳ ಈಗ ಅನ್ಯರ ಸೊತ್ತು
ಒಪ್ಪಿದೆನು ಒಲವೆ ನಿನ್ನೆಲ್ಲ ಪ್ರಿಯ ಚರ್‍ಚೆಗಳು
ಮೇಲು ಪ್ರತಿಭೆಯ ಲೀಲೆಗರ್‍ಹವೆನ್ನಿಸಿದವು ;
ಆದರೂ ನಿನ್ನ ಕವಿ ಕಂಡ ಹೊಸ ಹೊಳವುಗಳು
ನಿನ್ನಿಂದ ಕಳಚಿ ನಿನಗೇ ಮತ್ತೆ ತೊಡಿಸಿದವು ;
ಗುಣಶೀಲನೆಂದರೂ ನಿನ್ನ ನಡೆನುಡಿಯಲ್ಲೆ
ಇದ್ದದ್ದ ನೋಡಿ ಕದ್ದದ್ದು ; ಚೆನ್ನಿಗನೆಂದು
ಕೀರ್ತಿಸಿದರೂ, ಚೆಲುವ ನಿನ್ನ ಕೆನ್ನೆಗಳಲ್ಲೆ
ಕಂಡದ್ದು; ನಿನ್ನಲಿದ್ದದ್ದನ್ನೆ ಹೊಗಳಿದ್ದು.
ಅವನ ಮಾತಿಗೆ ಕೃತಜ್ಞತೆ ಹೇಳಲೇಕಿನ್ನು ,
ನೀನೆ ನೀಡಿರಲು ಅವ ಸಲಿಸಬೇಕಾದ್ದನ್ನು?
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 79
Whilst I alone did call upon thy aid

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾವಣಾಂತರಂಗ – ೯
Next post ಮನಸ್ಸು-ಕಡಲು

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys